ಭಾನುವಾರ, ಜುಲೈ 15, 2012

MAGU KALISIDA PAATA.

''ನಿಮಗೆ ಗೊಂಬೆಗಳು ಅಂದ್ರೆ  ಇಷ್ಟಾನ ? ''ಪುಟಾಣಿ  ಹುಡುಗಿಯೊಂದು ಮನೆಗೆ ಬಂದಿದ್ದ  ಅತಿಥಿಯನ್ನು ಕೇಳಿದಳು .''ಹೌದು ತುಂಬಾ ಇಷ್ಟ .''ಅತಿಥಿ ಹೇಳಿದರು .ಕೂಡಲೇ ಆ ಪುಟಾಣಿ ತನ್ನ ಕೋಣೆಗೆ ಓಡಿಹೋಗಿ, ತನ್ನ ಗೊಂಬೆಗಳ ರಾಶಿಯನ್ನೇ ತಂದು ಅತಿಥಿಗಳ ಎದುರಿಗೆ ಇಟ್ಟಳು.''ಈ ಗೊಂಬೆಗಳಲ್ಲಿ ನಿನಗೆ  ತುಂಬಾ ಪ್ರಿಯವಾದ ಗೊಂಬೆ ಯಾವುದು?''ಎಂದು ಅತಿಥಿ ಪುಟಾಣಿಯನ್ನು ಕೇಳಿದರು.ಪುಟಾಣಿ ,ಮೂಗು ಮುರಿದಿದ್ದ ,ಒಂದು ಕಾಲು ಒಂದು ಕೈ ಮುರಿದಿದ್ದ ಬೊಂಬೆಯೊಂದನ್ನು ಆ ರಾಶಿಯಿಂದ ಹೊರಕ್ಕೆ ತೆಗೆದು ಅತಿಥಿಗೆ ತೋರಿಸುತ್ತಾ ,''ಇದು'' ಎಂದಳು.ಆ ಅತಿಥಿ ಆಶ್ಚರ್ಯದಿಂದ ''ಏಕೆ''? ಎಂದು ಕೇಳಿದ.''ಏಕೆಂದರೆ ಇದನ್ನು ನಾನು ಪ್ರೀತಿಸದಿದ್ದರೆ ಇನ್ಯಾರು ಪ್ರಿತಿಸುತ್ತಾರೆ?''ಎಂದು ಅಭಿಮಾನದಿಂದ ಹೇಳಿದಳು.ಅತಿಥಿಗೆ ಆ ಪುಟ್ಟ ಮಗು ಅತಿದೊಡ್ಡ ಪಾಠ ಕಲಿಸಿತ್ತು .ಪ್ರೀತಿ ಎಲ್ಲರಿಗೂ ಬೇಕಾದರೂ ದುಃಖಿಗಳಿಗೆ
ಅಸಹಾಯಕರಿಗೆ,ರೋಗಿಗಳಿಗೆ,ವಿಕಲಾಂಗರಿಗೆ ಅದರ ಅವಶ್ಯಕತೆ ಇತರರಿಗಿಂತ ಹೆಚ್ಚಾಗಿರುತ್ತದೆ.ನಿಸ್ವಾರ್ಥ ಪ್ರೀತಿಯಲ್ಲಿ ಕೇವಲ ಅದನ್ನು ಕೊಡುವ ಭಾವನೆ ಮಾತ್ರ ಇರುತ್ತದೆ,ಹಿಂದಕ್ಕೆ ಪಡೆಯುವ ಆಕಾಂಕ್ಷೆ ಇರುವುದಿಲ್ಲ.ಇಲ್ಲಿ ಈ ಪುಟಾಣಿ ಎಲ್ಲಾ ಗೊಂಬೆಗಳಲ್ಲಿ ವಿಕಲಾಂಗವಾದ ,ಬೇರೆ ಯಾರೂ ಇಷ್ಟಪಡ ದಂತಹ ಗೊಂಬೆಯನ್ನೇ ಇಷ್ಟಪಟ್ಟಳು.ಇದೇ ಪರಿಶುದ್ಧ ಪ್ರೀತಿ ಆಲ್ವಾ?

ಶನಿವಾರ, ಜನವರಿ 28, 2012

”ವ್ರುದ್ಧಾಶ್ರಮ”ಗಳಾಗಿ ಮಾರ್ಪಾಡು ಹೊ೦ದುತ್ತಿರುವ ಹಳ್ಳಿಗಳು.

ಹಳ್ಳಿಗಳೇ  ಭಾರತದ ಬೆನ್ನೆಲಬು.ಆದರೆ ಇಗ ಹಳ್ಳಿಗಳಲ್ಲಿ ವಾಸಿಸುವ ಜನರು ಉದ್ಯೋಗ ಅರಸಿ ಪಟ್ಟಣ ಸೇರಲು ಪ್ರಾರಂಭಿಸಿದ ನಂತರ ಹಳ್ಳಿಗಳು ವ್ರುದ್ಧಾಶ್ರಮಗಳಾಗಿ ಮಾರ್ಪಾಡು ಹೊಂದುತ್ತಿದೆ.ಇಗ ಓದಲಿ,ಓದದೆ ಇರಲಿ ಜನರು ಉದ್ಯೋಗಕ್ಕಾಗಿ ಪಟ್ಟಣ ಸೇರುತ್ತಿರುವುದನ್ನು ಕಾಣಬಹುದಾಗಿದೆ.ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಕೃಷಿ ಮಾಡುವವರಿಲ್ಲದೆ,ನಾವು ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಗಬಹುದು.                                       ನಾವೂ ಕೂಡ ನಮ್ಮ ಮಕ್ಕಳು ಇಂಜಿನಿಯರ್,ಡಾಕ್ಟರ ಆಗಬೇಕು ಅಂತ ಬಯಸುತ್ತೆವೆಯೇ ಹೊರತು,ನನ್ನ ಮಗ ಒಬ್ಬ ಕೃಷಿಕ ನಾಗಲಿ ಅಂತ ಬಯಸುವುದಿಲ್ಲ.ಆದರೆ ವಿದ್ಯಾವಂತರು ಕೃಷಿಯಲ್ಲಿಯೇ ಏನಾದರೂ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಬಹುದು.ಹಾಗಂತ ಪಟ್ಟಣಗಳೆ ಬೇಡ,ಪಟ್ಟಣದಲ್ಲಿ ಉದ್ಯೋಗವನ್ನೇ ಮಾಡಬಾರದು ಅಂತ ಅಲ್ಲ.ಭಾರತ ಅಭಿವೃದ್ಧಿ ಹೊಂದಲು ಕೈಗಾರಿಕೆಗಳೂ ಅಷ್ಟೇ ಮುಖ್ಯ.ಆದರೆ ಎಲ್ಲರೂ ಕೈಗಾರಿಕೆಗಳಲ್ಲಿಯೇ ದುಡಿಯುವವರಾದರೆ ,ಕೃಷಿಯ ಗತಿ ಏನು?ಅತಿಯಾದರೆ ಅಮೃತವೂ ವಿಷವಾಗುತ್ತದೆ.           ಇತ್ತೀಚಿಗೆ ನಾವು ಯಾವುದೇ ಹಳ್ಳಿಗಳಲ್ಲಿ ಕಾಣಬಹುದಾದ ಬಹು ಮುಖ್ಯ ಅಂಶ ಎಂದರೆ ,ಹಳ್ಳಿಗಳು ವೃದ್ಧಾಶ್ರಮ ಗಳಾಗುತ್ತಿರುವುದು.ಯಾವುದೇ ಮನೆಯಲ್ಲಿ ಕೇಳಿದರೂ ,"ನನ್ನ ಮಕ್ಕಳು ಪಟ್ಟಣದಲ್ಲಿದ್ದಾರೆ,ನನ್ನ ಮಗವಿದೇಶದಲ್ಲಿರೋದು,ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಇರೋದು "ಅಂತಾರೆ.ಮೊದಲೆಲ್ಲ ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿ ತಮ್ಮ ಮುಸ್ಸಂಜೆಯ ಜೀವನವನ್ನು ಸಾಗಿಸುತ್ತಿದ್ದವರು,ಇಂದು ಏಕಾಂಗಿಯಾಗಿ ತಮ್ಮ ಕೊನೆಗಾಲವನ್ನು ಕಳೆಯುವಂತಹ ಪರಿಸ್ತಿತಿ ಬಂದೊದಗಿದೆ.ತಮ್ಮ ಮಕ್ಕಳು ,ತಮ್ಮ ಕೊನೆಗಾಲದಲ್ಲಿ ತಮಗೆ ಆಸರೆಯಾಗಿರುತ್ತಾರೆ ಎಂಬ ಕಿಂಚಿತ್ ಆಸೆಯನ್ನು ತಂದೆ ತಾಯಿ ಇಟ್ಟುಕೊಳ್ಳುವಂತಿಲ್ಲ.ಎಷ್ಟೋ ಮಕ್ಕಳಿಗೆ ತಮ್ಮ ತಂದೆ ತಾಯಿಯ ಅಂತ್ಯಸಂಸ್ಕಾರಕ್ಕೂ ಬರಲು ಆಗುವುದಿಲ್ಲ.ಏಕೆಂದರೆ ,ಅವರು ವಿದೇಶದಲ್ಲಿರುತ್ತಾರಲ್ಲ.!!!!!!!!!!

ಶನಿವಾರ, ಡಿಸೆಂಬರ್ 17, 2011

ದೇಶದ ಪ್ರಗತಿಯಲ್ಲಿ ಮಹಿಳೆಯ ಪಾತ್ರ.

ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದ ಹುಡುಗಿ .ಹಳ್ಳಿಯಲ್ಲಿ ಸಾಮಾನ್ಯವಾಗಿ ಕೆಲಸ ಮುಗಿದ ಮೇಲೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿಕೊಂಡು ಹರಟೆ ಹೊಡೆಯುವುದು  ಸಾಮಾನ್ಯ.ಆದರೆ ಈಗ ಹಾಗೇನಿಲ್ಲ ಬಿಡಿ. ಯಾಕಂದ್ರೆ ಸಾಮಾನ್ಯವಾಗಿ ಸಂಘಗಳು [ಮಹಿಳಾ ಸಂಘಗಳು] ಜಾರಿಗೆ ಬಂದಮೇಲೆ ಪ್ರತಿಯೊಬ್ಬ ಮಹಿಳೆಗೂ ಒಂದು ನಿಮಿಷವೂ ಬಿಡುವಿಲ್ಲದ ಕೆಲಸವಿರುತ್ತದೆ.ಮನೆಗೆಲಸ,ತೋಟದಕೆಲಸ ಎಲ್ಲಾ ಮುಗಿದ ಮೇಲೆ ಸಂಘದ ಕೆಲಸ.ಹೀಗೆ ಮಹಿಳೆಯರು ಸ್ವಯಂ ಉದ್ಯೋಗವನ್ನು ಕಂಡುಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.ಇದಿಷ್ಟು ಹಳ್ಳಿಯಲ್ಲಿನ ಮಹಿಳೆಯರ ಸ್ತಿತಿಗತಿಯಾದರೆ,ಪಟ್ಟಣದಲ್ಲಿನ ಮಹಿಳೆಯರು ಸಾಮಾನ್ಯಾವಾಗಿ ಉದ್ಯೋಗಿಗಳಾಗೆ ಇರುತ್ತಾರೆ.ಇನ್ನು ಕೆಲವರು ಉದ್ಯೋಗ ಮಾಡದೆ ಇದ್ದರೂ ,ಸಂಗೀತ ಕಲಿಯೋದು,ಡಾನ್ಸ್ ಕಲಿಯೋದು,ಕಂಪ್ಯೂಟರ್ ಕಲಿಯೋದು,ಟೈಲರಿಂಗ್ ........................ಬೇಕಾದಷ್ಟು ಕೋರ್ಸ್ ಗಳಿರುತ್ತದಲ್ಲಾ ಅದರಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಂಡು ,ಅದನ್ನು ಕಲಿಯೋದರಲ್ಲಿ ತಮ್ಮಬಿಡುವಿನ ವೇಳೆಯನ್ನು ಸಮರ್ಪಕವಾಗಿ ಕಳೆಯುತ್ತಾರೆ. ಆದರೆ ,ಪಟ್ಟಣದಲ್ಲಿ ಹೀಗೆ ನಾನಾತರಹದ ಅವಕಾಶಗಳಿದ್ದರೂ ,ಯಾವುದನ್ನೂ ಉಪಯೋಗಿಸಿಕೊಳ್ಳದೆ ಕೇವಲ ಧಾರಾವಾಹಿಗಳನ್ನು ನೋಡುವುದು,ಆಕಡೆ ಇಕಡೆ ಮನೆಯವರ ಸುದ್ದಿ ಮಾತನಾಡುತ್ತಾ ,ಹರಟೆ ಹೊಡೆಯುತ್ತಾ  ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡಿಕೊಂಡು ,ಸುಮ್ಮನೆ ದಿನ ದೂಡುವವರೂ ಇದ್ದಾರೆ.ಮೊನ್ನೆ ನಮ್ಮ ಯಜಮಾನರು ಚೀನಾಕ್ಕೆ ಹೋಗಿಬಂದವರು ಹೇಳುತ್ತಿದ್ದರು,ಅಲ್ಲಿ ಪ್ರತಿಯೊಂದು ಕೆಲಸದಲ್ಲಿಯೂ ಮಹಿಳೆಯರೇ ಮುಂದು.ದಿನದಲ್ಲಿ ಒಂದೊದು ನಿಮಿಷವನ್ನೂ ಅವರು ದುಡಿಯುವುದಕ್ಕಾಗಿಯೇ ಮೀಸಲಿಡುತ್ತಾರೆ.ಅಲ್ಲಿ ಸೋಮಾರಿಗಳು ಭಾರಿ ಕಡಿಮೆ.ಆದ್ದರಿಂದಲೇ,ಅಲ್ಲಿ ಅಷ್ಟೊಂದು ಜನಸಂಕ್ಯೆ ಇದ್ದರೂ ಕೂಡ ಆ ದೇಶ ಅಷ್ಟೊಂದು ಮುಂದುವರಿಯಲು ಕಾರಣವಾಗಿದೆ.ಆದರೆ ನಮ್ಮ ದೇಶದಲ್ಲಿ ,ದುಡಿಯುವವರು ಒಬ್ಬರು ,ಕೂತು ತಿನ್ನುವವರು ನಾಲ್ಕು ಮಂದಿ.ಆದರೆ ,ನಮ್ಮ ದೇಶದಲ್ಲೂ ಮಹಿಳೆಯರು  ಹೆಚ್ಚು ವಿದ್ಯ್ಯಾವನ್ಥರಾಗಿ,ಬೇರೆವಿಶಯಗಳನ್ನು ಚರ್ಚಿಸುವುದರ ಬದಲು.ನಮ್ಮಿಂದ ನಾವು ಹುಟ್ಟಿದ  ಈ ನಾಡಿಗೆ ಏನಾದರೂ ಅಲ್ಪ ಸೇವೆಯನ್ನಾದರೂ ಸಲ್ಲಿಸಲು ಸಾಧ್ಯವೇ?ಎಂಬ ಒಂದು ಚಿಕ್ಕ ಆಲೋಚನೆ ಯನ್ನು ಮಾಡಿದರೂ ನಮ್ಮ ದೇಶ ಮುಂದುವರಿದ ದೇಶ ಆಗುವುದರಲ್ಲಿ ಅನುಮಾನವೇ ಇಲ್ಲ.

ಭಾನುವಾರ, ಡಿಸೆಂಬರ್ 11, 2011

ಗಣಪತಿಯನ್ನು ನೀರಿನಲ್ಲಿ ಯಾಕೆ ಮುಳುಗಿಸುತ್ತಾರೇ?

ಚೌತಿ ಹಬ್ಬಕ್ಕೆ ಊರಿಗೆ ಹೋದಾಗ ನನ್ನ ಮಗನಿಗೆ ಸ೦ಭ್ರಮವೋ ಸ೦ಭ್ರಮ.ಪಟಾಕಿ ಹೊಡಿಬಹುದಲ್ಲಾ ಅ೦ತ.ನಮ್ಮ ಮನೆಯಲ್ಲಿ ಗಣಪತಿ ಕೂರಿಸುತ್ತಾರೆ.ಸರಿ,ಬೆಳಗ್ಗೆಯಿಂದ ಅಮ್ಮ ,ನಾನು ಎಲ್ರೂ ಅಡುಗೆಮನೆಯ ಕೆಲಸದಲ್ಲಿ,ನನ್ನ ತಮ್ಮ ಪೂಜೆಗೆ ರೆಡಿ ಮಾಡೋದ್ರಲ್ಲಿ ,ಅಜ್ಜ ಮೊಮ್ಮಗ ಪಟಾಕಿ ಹೊಡೆಯೋದ್ರಲ್ಲಿ ನಿರತರಾಗಿದ್ದೆವು.ಪುರೋಹಿತರು ಬಂದರು ,ಪೂಜೆ ಎಲ್ಲಾ ಮುಗಿತು. ಹಬ್ಬದ ಊಟವೂ ಆಯಿತು.ನಂತರ ನಮ್ಮ ಊರಿನಲ್ಲಿ 22  ಮನೆಗಳಿವೆ,ಹೆಚ್ಚು ಕಡಿಮೆ ಎಲ್ಲರ ಮನೆಯಲ್ಲೂ ಗಣಪತಿ ಕೂರಿಸುತ್ತಾರೆ .ನಾವೆಲ್ಲಾ ಎಲ್ಲರ ಮನೆಗಳಿಗೂ ಹೋಗಿ ಗಣಪತಿಯ ದರ್ಶನ ಮಾಡಿ ಬರುವುದು ನಮ್ಮ ಊರಿನ ಪದ್ಧತಿ.ಅದರಂತೆ ಎಲ್ಲರ ಮನೆಗಳಿಗೂ ನಾವು ಹೋಗಿಬಂದೆವು.ಆದಿನ ಸಂಜೆ ಊರಿನವರೆಲ್ಲ ಸೇರಿ ,ನಮ್ಮ ಊರಿನ ಕೆರೆಯಲ್ಲಿ ಗಣಪತಿಯನ್ನು ಮುಳುಗಿಸುವ  ಕಾರ್ಯಕ್ರಮ.ಸರಿ ,ಅವರವರ ಮನೆಯ ಗಣಪತಿಯನ್ನು ಎಲ್ಲರೂ ಕೆರೆಬಳಿ ತೊಗೋ೦ಡೂ ಬಂದರು.ಎಲ್ಲರೂ ಪಟಾಕಿ ಹೊಡೆದೂ ಆಯ್ತು,''ಗಣಪತಿ ಬಪ್ಪ ಮೋರಿಯೋ''ಎಂದು ಕೂಗುತ್ತ ,ಇನ್ನೇನು ಗಣಪತಿಯನ್ನು ಕೆರೆಯಲ್ಲಿ ಮುಳುಗಿಸಬೇಕು ಅನ್ನೋಅಸ್ಟರಲ್ಲಿ ನನ್ನ ಮಗ ಪಟಾಕಿ ಹೊಡೆಯೋದನ್ನು ಬಿಟ್ಟು[ಅವನು ಹೊಡೆಯೊಲ್ಲ,ಪಟಾಕಿ ಹೊಡೆಯೋದನ್ನು ನೋಡ್ತಾನೆ.ಅವನಿಗಿನ್ನೂ ೫ ವರ್ಷ]ಓಡಿಬಂದ ''.ಅಮ್ಮ ಗಣಪತಿನ್ ಯಾಕೆ ಕೆರೆಯಲ್ಲಿ ಮುಳುಗಿಸುತ್ತಾರೆ?ಇಷ್ಟೊತ್ತು ದೇವರು ಅಂತ ಪೂಜೆ ಮಾಡಿದ್ರಿ,ದೇವರನ್ನ ನೀರಿಗೆ ಹಾಕ್ತಾರ?ಗಣಪತಿಗೆ ಚಳಿಯಾಗಿ ಶೀತ ಆಗಲ್ವಾ?ಪಾಪ ಗಣಪತಿ ಎಷ್ಟು ಅಳ್ತಾನೋ ಏನೋ?ಅವರಮ್ಮ ನಿಮಗೆ ಬಯ್ಯೋದಿಲ್ವಾ?ಹೇಳಮ್ಮ ಗಣಪತಿನ್ ಯಾಕೆ ಕೆರೆಗೆ ಹಾಕ್ತಾರೆ? ಅಂದ.ಸರಿ ,ಆ ಹೊತ್ತಿಗೆ ಏನೋ ಒಂದು ಹೇಳಿ ಸುಮ್ಮನಾಗಿಸಿದೆ.ಆದರೆ ಆಮೇಲೆ ನನಗೂ ಅನ್ನಿಸ್ತು ,ಹೌದು ಗಣಪತಿನ ಯಾಕ್ ಮುಳುಗಿಸುತ್ತಾರೆ?ನನಗೂ ಸರಿಯಾದ ಉತ್ತರ ಯಾರಿಂದಲೂ ಸಿಗಲಿಲ್ಲ.ಆದರೆ ನನ್ನ ಮಗ ಒಂದು ದಿನ ಪುರೋಹಿತರು ನಮ್ಮ ಮನೆಗೆ ಬಂದಾಗ ,ಅವರನ್ನೇ ಕೇಳಿದ,''ಭಟ್ರೇ,ಗಣಪತಿನ ಯಾಕೆ ಕೆರೆ ಯಲ್ಲಿ ಮುಳುಗಿಸುತ್ತಾರೆ?''.ಅದಕ್ಕೆ ಪುರೋಹಿತರು,''ಗಣಪತಿ ಗಂಗೆಗೂ ಮಗ ,ಅದಕ್ಕೆ ಅವನ ಅಮ್ಮನ ಜೊತೆ ಅವನನ್ನ ಕಳುಹಿಸೋದು.ಗಂಗೆ ಅಂದರೆ ,ನೀರು ತಾನೇ?ಅದಕ್ಕೆ ಗಣಪತಿನ ನೀರಲ್ಲಿ ಮುಳುಗಿಸೋದು ಗೊತ್ತಾಯ್ತ?''ಅಂದರು.ಆಗ ನನ್ನ ಮಗನಿಗೆ ಸಮಾಧಾನವಾಯಿತು.ಮಕ್ಕಳು ಚಿಕ್ಕವರಾದರೂ ಅವರ ಯೋಚನಾಲಹರಿ ತುಂಬಾ ದೊಡ್ದದಿರುತ್ತದಲ್ವಾ?

ಶನಿವಾರ, ಡಿಸೆಂಬರ್ 10, 2011

AMMA NAANU DEVARAANE BENNE KADDILLAMMAA......................







nanna maga kelida question.

ಒಂದು ದಿನ ಊಟ ಮಾಡುತ್ತಿರುವಾಗ ,ನನ್ನ ಮಗ ಕೇಳಿದ,''ಅಮ್ಮ ಅನ್ನ ದೇವರು ಅಂತೀಯ ,ಅನ್ನಪೂರ್ಣೆ  ಶ್ಲೋಕ ಹೇಳು ಅಂತಿಯ ದೇವರನ್ನ ಯಾರಾದ್ರು ತಿಂತಾರ?ನಾವು ದೇವರನ್ನೇ ತಿಂದಹಾಗೆ ಆಗೋಲ್ವೇ?ಹೇಳಮ್ಮ ಅನ್ನ ದೇವರು ಹೌದೋ ಅಲ್ಲವೋ?"ಅಂದ.ಅದಕ್ಕೆ ನನಗೊಮ್ಮೆ ಏನು ಉತ್ತರ ಹೇಳಬೇಕೆಂದೇ ತೋಚಲಿಲ್ಲ!ನೀವಾದ್ರೆ ಏನ್ ಹೇಳ್ತಿದ್ರಿ?ದಯವಿಟ್ಟು ಹೇಳ್ರಿ.